ಪಾರ್ತಿಸುಬ್ಬ ಪ್ರಶಸ್ತಿ: ತಿಮ್ಮಾರೆಡ್ಡಿ ಆಯ್ಕೆ
ಲೇಖಕರು : ಉದಯವಾಣಿ
ಗುರುವಾರ, ಫೆಬ್ರವರಿ 4 , 2016
|
ಫೆಬ್ರವರಿ 4, 2016
|
ಪಾರ್ತಿಸುಬ್ಬ ಪ್ರಶಸ್ತಿ: ತಿಮ್ಮಾರೆಡ್ಡಿ ಆಯ್ಕೆ
ಬೆಂಗಳೂರು :
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ 2015ರ ಪ್ರಶಸ್ತಿ ಪ್ರಕಟವಾಗಿದ್ದು, ಹೊಸಪೇಟೆ ತಾಲೂಕು ಬಯಲು ಗದ್ದಿಗೇರಿಯ ಬಯಲಾಟ ಕಲಾವಿದ ಗುಂಡ್ಲ ವದ್ದಿಗೇರಿ ತಿಮ್ಮಾರೆಡ್ಡಿ (76) ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯೂ ಒಂದು ಲಕ್ಷ ರೂ. ನಗದು, ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.
10 ಕಲಾವಿದರಿಗೆ ಗೌರವ ಪ್ರಶಸ್ತಿ
2015ರ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದ್ದು, 10 ಮಂದಿ ಹಿರಿಯ ಕಲಾವಿದರಿಗೆ ಗೌರವ ಪ್ರಶಸ್ತಿ ನೀಡಲಾಗುವುದು.
ಕುಂದಾಪುರದ ಕಲಾವಿದ ಕಂದಾವರ ರಘುರಾಮಶೆಟ್ಟಿ (ಯಕ್ಷಗಾನ ಪ್ರಸಂಗಕರ್ತ, ಬಡಗುತಿಟ್ಟು), ಹೊನ್ನಾವರ ತಾಲೂಕು ಕೊಂಡಾಕುಳಿಯ ಹಡಿನಬಾಳ ಶ್ರೀಪಾದ ಹೆಗಡೆ (ಯಕ್ಷಗಾನ ಕಲಾವಿದ ಬಡಾ ಬಡಗು), ಮಂಗಳೂರಿನ ಅಸೈಗೊಳಿಯ ಬೊಟ್ಟಿಕೆರೆ ಪುರುಪೋತ್ತಮ ಪೂಂಜಾ(ಭಾಗವತರು ತೆಂಕುತಿಟ್ಟು), ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ರಾಮನಾಯ್ಕ (ಯಕ್ಷಗಾನ ಪ್ರಸಾದನ), ವಿಜಯಪುರ ಬಸವನ ಬಾಗೇವಾಡಿ ತಾಲೂಕಿನ ಅವ್ವಪ್ಪ ಸಣ್ಣಪ್ಪ ಅಳ್ಳಿಚಂಡಿ(ಶ್ರೀಕೃಷ್ಣ ಪಾರಿ ಜಾತ), ಚಿಕ್ಕೋಡಿ ತಾಲೂಕು ಧುಳಗವಾಡಿಯ ಯಮುನಾಬಾಯಿ ಲಕ್ಷ್ಮಣ ಕಲಾಚಂದ್ರ (ಸಣ್ಣಾಟ), ಹಾಸನ ಜಿಲ್ಲೆ ಆಲೂರು ತಾಲೂಕು ಮರಸುಕೊಪ್ಪಲಿನ ಗೌರಮ್ಮ (ತೊಗಲುಗೊಂಬೆಯಾಟ), ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲೂಕಿನ ಎಸ್. ಸೊಲ್ಲಮ್ಮ (ಬಯಲಾಟ), ಮಧುಗಿರಿ ತಾಲೂಕು ತೋಟ ಮಡಗಲು ಗ್ರಾಮದ ಸಣ್ಣ ತಿಮ್ಮಯ್ಯ (ಮೂಡಲಪಾಯ ಯಕ್ಷಗಾನ) ಹಾಗೂ ಚಿತ್ರದುರ್ಗದ ಬೆಳಗಟ್ಟದ ಎ.ಕೆ.ಮಾರಯ್ಯ(ಬಯಲಾಟ ಮದ್ದಳೆಗಾರ) ಅವರನ್ನು ವಾರ್ಷಿಕ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
50 ಸಾವಿರಕ್ಕೆ ಹೆಚ್ಚಳ
ಕಳೆದ ಬಾರಿ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ 10 ಸಾವಿರ ರೂ.ಗಳನ್ನು ನಗದು ಬಹುಮಾನವಾಗಿ ನೀಡಲಾಗುತ್ತಿತ್ತು. ಆದರೆ 2015ರ ಸಾಲಿನಲ್ಲಿ ಈ ಮೊತ್ತವನ್ನು ರಾಜ್ಯ ಸರಕಾರ 50 ಸಾವಿರ ರೂ.ಗಳನ್ನು ಕೊಡಲು ತೀರ್ಮಾನಿಸಿದೆ ಎಂದು ಅಕಾಡೆಮಿ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ ತಿಳಿಸಿದರು.
ಕೃಪೆ :
udayavani
|
|
|